ಎಮ್‌ಎಲ್‌ಸಿ ಜನ್ಮದಿನದ ಅಂಗವಾಗಿ ರಕ್ತದಾನ ಶಿಬಿರ

  • In State
  • August 7, 2021
  • 413 Views
ಎಮ್‌ಎಲ್‌ಸಿ ಜನ್ಮದಿನದ ಅಂಗವಾಗಿ ರಕ್ತದಾನ ಶಿಬಿರ

ಹಾನಗಲ್ : ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ್ ಮಾನೆ 47ನೇ ಜನ್ಮದಿನದ ಅಂಗವಾಗಿ ತಾಲೂಕಿನ ಬಮ್ಮನಹಳ್ಳಿಯ ವಿರಕ್ತಮಠದಲ್ಲಿ ಶುಕ್ರವಾರ ಶ್ರೀನಿವಾಸ್ ಮಾನೆ ಗೆಳೆಯರ ಬಳಗ, ಹುಬ್ಬಳ್ಳಿಯ ಕಿಮ್ಸ್ನ ಲೈಫ್ ಲೈನ್ ಆಯೋಜಿಸಲಾಗಿದ ರಕ್ತದಾನ ಶಿಬಿರದಲ್ಲಿ 51 ಜನ ರಕ್ತದಾನ ಮಾಡಿದರು.
ಕಾಂಗ್ರೆಸ್ ಮುಖಂಡ ಯಾಸೀರ್‌ಖಾನ್ ಪಠಾಣ ಮಾತನಾಡಿ, ದಾನಗಳಲ್ಲಿ ರಕ್ತದಾನ ಅತ್ಯಂತ ಶ್ರೇಷ್ಠವಾದುದು. 18 ರಿಂದ 60 ವರ್ಷ ವಯಸ್ಸಿನ ಆರೋಗ್ಯವಂತರೆಲ್ಲರೂ ರಕ್ತದಾನ ಮಾಡುವುದನ್ನು ರೂಢಿಸಿಕೊಳ್ಳಬೇಕೆಂದು ಸಲಹೆ ಮಾಡಿದರು. ಈರಪ್ಪ ಚಿಕ್ಕಣಗಿ, ನಾಗರಾಜ್ ಚನ್ನೂರ, ಅರುಣ ಮಲ್ಲಮ್ಮ, ರಾಮೂ ಯಳ್ಳೂರ, ಬಸವರಾಜ್ ಹಾದಿಮನಿ, ಬಸವಲಿಂಗಯ್ಯ ಕಂಬಾಳಿಮಠ, ಮನೋಜ್ ಉಡುಗಣಿ, ಸೋಮನಾಥ ಚೌವ್ಹಾಣ್, ಲಕ್ಷ್ಮೀ ಕಲಾಲ,  ವಿಜಯಕುಮಾರ್ ದೊಡ್ಡಮನಿ ಇನ್ನಿತರರಿದ್ದರು.

Related