ಕಾಂಗ್ರೆಸ್ ತೊರೆದ ಕಾರ್ಯಕರ್ತರು

ಕಾಂಗ್ರೆಸ್ ತೊರೆದ ಕಾರ್ಯಕರ್ತರು

ಮಹದೇವಪುರ: ಕ್ಷೇತ್ರದ ಗ್ರಾಮಾಂತರ ಮಂಡಲ ಕಿತ್ತಗನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕುರುಡುಸೊಣ್ಣೇನಹಳ್ಳಿ ಮುಖಂಡರಾದ ವೆಂಕಟೇಶ್ ಹಾಗೂ ಸೂರಿ ನೇತೃತ್ವದಲ್ಲಿ ಕಾಂಗ್ರೆಸ್ ತೊರೆದ ನೂರಾರು ಕಾರ್ಯಕರ್ತರು ಶಾಸಕ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೋಮವಾರ ಸೇರ್ಪಡೆಯಾದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ನಾವು ಜನಪ್ರತಿನಿಧಿಗಳು ಜನರ ಕೆಲಸ ಮಾಡುತ್ತೇವೆ, ಒಳರಾಜಕೀಯ ಎಲ್ಲಾ ಪಕ್ಷದಲ್ಲೂ ಇರುತ್ತೇವೆ, ಆದರೆ ಜನರ ಕೆಲಸ ಮಾಡುವುದನ್ನೇ ಕಾಂಗ್ರೆಸ್ ಪಕ್ಷ ಮರೆತಿದೆ ಆದ್ದರಿಂದ ಅನೇಕರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಕಾಂಗ್ರೆಸ್ ಮುಕ್ತ ಕ್ಷೇತ್ರ ಮಾಡಲು ನಾವು ಶ್ರಮಿಸುತ್ತೇವೆ . ಬಿಜೆಪಿಗೆ ಸೇರ್ಪಡೆಗೊಂಡವರು, ಯಾವುದೇ ಅಪೇಕ್ಷೆಗಳಿಲ್ಲದೆ ಪಕ್ಷಕ್ಕಾಗಿ ದುಡಿಯಬೇಕು ಪಕ್ಷದ ಸಿದ್ಧಾಂತಗಳಿಗೆ ತಲೆದೂಗಬೇಕಾಗುತ್ತದೆ.  ಕಿತ್ಗನ್ನೂರು ಗ್ರಾಮ ಪಂಚಾಯತಿಯ ಸದಸ್ಯರುಗಳು ರಾಜಮ್, ಮುನಿರತ್ನ, ಚೇತನ ರವರು ನಮ್ಮ ಪಕ್ಷಕ್ಕೆ ಸೇರಿರುವದರಿಂದ ಇನ್ನೂ ಹೆಚ್ಚಿನ ಅಭಿರುದ್ಧಿ ಕಾರ್ಯಗಳಿಗೆ ಸಹಕಾರಿಯಾಗಲಿದೆ.

ಗ್ರಾಮಾಂತರ ಮಂಡಲಾದ್ಯಕ್ಷರಾದ ನಟರಾಜ್, ಪಕ್ಷದ ಹಿರಿಯ ಮುಖಂಡರಾದ ಆನಂದ, ಹೂಡಿ ಮಂಜುನಾಥ, ಕಬ್ಬಡಿ ಪಿಳ್ಳಪ್ಪ, ರಾಂಪುರ ಚಂದ್ರಪ್ಪ, ಮಹೇಶ್, ಕಾಡುಗುಡಿ ರಾಮಾಂಜೀ, ಊರಿನ ಪ್ರಮುಖರು ಉಪಸ್ಥಿತರಿದ್ದರು.

Related