ನಾಲೆಗೆ ಬಾರದ ನೀರು

  • In State
  • July 11, 2020
  • 465 Views
ನಾಲೆಗೆ ಬಾರದ ನೀರು

ಬಸವಕಲ್ಯಾಣ: ಮಳೆಗಾಲ ಆರಂಭವಾಗಿ ತಿಂಗಳಾದರೂ ತಾಲ್ಲೂಕಿನ ಚುಳಕಿನಾಲಾ, ಮುಲ್ಲಾಮಾರಿ ಮೇಲ್ದಂಡೆ ಯೋಜನೆಯ ಜಲಾಶಯಗಳಿಗೆ ನೀರು ಹರಿದಿಲ್ಲ.
ದೊಡ್ಡ ಕೆರೆಗಳಾದ ತ್ರಿಪುರಾಂತ ಕೆರೆ, ನಾರಾಯಣಪುರ ಕೆರೆ, ಪ್ರತಾಪುರ ಕೆರೆ, ಶಿವಪುರ ಕೆರೆ, ಬೆಟಬಾಲ್ಕುಂದಾ ಕೆರೆ, ಆಲಗೂಡ ಕೆರೆ, ಅಟ್ಟೂರ್ ಕೆರೆ, ಉಜಳಂಬ ಕೆರೆಗಳಲ್ಲಿ ತಗ್ಗುಗಳಿರುವ ಸ್ಥಳಗಳಲ್ಲಿ ಬರೀ ಒಂದು ಅಡಿಯಷ್ಟು ಮಾತ್ರ ನೀರು ಸಂಗ್ರಹಗೊಂಡಿದೆ. ಕೆರೆಗಳು ತುಂಬಿಲ್ಲ. ಹೀಗಾಗಿ ಅಂತರ್ಜಲದ ಮಟ್ಟ ಹೆಚ್ಚದ ಕಾರಣ ತೆರೆದಬಾವಿ, ಕೊಳವೆ ಬಾವಿಗಳಲ್ಲಿ ನೀರು ಕುಸಿದಿವೆ.
ಉತ್ತಮ ಮಳೆ ಆಗಿರುವುದರಿಂದ ಎಲ್ಲ ಭಾಗದಲ್ಲೂ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಬೀಜಗಳು ಮೊಳಕೆಯೊಡೆದಿದ್ದರಿಂದ ಹೊಲಗಳಲ್ಲಿ ಹಸಿರು ಕಾಣುವಂತಾಗಿದೆ. ಆದರೆ, ನಾಲೆ, ಬಾವಿಗಳಿಗೆ ನೀರು ಬಾರದೆ ತೊಂದರೆಯಾಗಿದೆ.

Related