ಚನ್ನಕೇಶವಸ್ವಾಮಿಯ ಪುಟ್ಟರಥೋತ್ಸವ

  • In State
  • April 6, 2020
  • 551 Views
ಚನ್ನಕೇಶವಸ್ವಾಮಿಯ ಪುಟ್ಟರಥೋತ್ಸವ

ಬೇಲೂರು, ಏ. 06: ಇಲ್ಲಿನ ಶ್ರೀಚನ್ನಕೇಶವಸ್ವಾಮಿ ರಥೋತ್ಸವ ಕೊರೊನಾ ಕಾಯಿಲೆ ಹಿನ್ನಲೆಯಲ್ಲಿ ರದ್ಧಾದರೂ ಬೆರಳೆಣಿಕೆಯಷ್ಟು ಭಕ್ತರು ಪುಟ್ಟದಾದ ರಥವನ್ನು ದೇಗುಲದ ನಾಲ್ಕು ಬೀದಿಗಳಲ್ಲಿ ಎಳೆಯುವ ಮೂಲಕ ರಥೋತ್ಸವ ನಡೆಸಿ ಭಕ್ತಿ ಸಮರ್ಪಿಸಿದರು.

ಪಟ್ಟಣದ ಪಾಚುಭಟ್ಟರ್ ಅವರ ನಿವಾಸದಲ್ಲಿದ್ದ ಪುಟ್ಟದಾದ ಮರದ ರಥ (ದೊಡ್ಡರಥ ಹೋಲುವಂತಿದೆ) ಒಳಗೆ ಶ್ರೀಚನ್ನಕೇಶವಸ್ವಾಮಿ, ಸೌಮ್ಯನಾಯಕಿ, ರಂಗನಾಯಕಿ ಅಮ್ಮನವರನ್ನು ಪ್ರತಿಷ್ಠಾಪಿಸಿ ಶಾಸ್ತ್ರೋಕ್ತ ದಾರಕಟ್ಟಿ ಎಳೆಯಲಾಯಿತು. ರಥೋತ್ಸವಕ್ಕೆ ದೇಗುಲದ ಆಗಮಿಕ ಅರ್ಚಕ ಕೃಷ್ಣಸ್ವಾಮಿಭಟ್ಟರ್ ಪೂಜಿಸಿ ಚಾಲನೆ ನೀಡಿದರು.

ರಥೋತ್ಸವದಲ್ಲಿ ಭಕ್ತರಾದ ನರಸಿಂಹಪ್ರಿಯಾಭಟ್ಟರ್, ರಘೋತ್ತಮ್ ಹಾಗೂ ನಾಗರಾಜ್‌ಚಕ್ರವರ್ತಿ ಪಾಲ್ಗೊಂಡಿದ್ದರು. ರಥಸಾಗುವ ವೇಳೆ ನಿವಾಸಿಗಳು ಭಕ್ತಿ ಸಮರ್ಪಿಸಿದರು.

 

 

Related