ನವದೆಹಲಿ,ಅ.14: ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಭೀಕರ ಯುದ್ಧದ ನಡುವೆ ಇಸ್ರೇಲ್ನಲ್ಲಿ ಸಿಲುಕಿದ್ದ ಭಾರತೀಯರ ಎರಡನೇ ಬ್ಯಾಚ್ ಆಗಮಿಸಿದೆ. ಕೇಂದ್ರ ಸರ್ಕಾರದ ಆಪರೇಷನ್ ಅಜಯ್ ಕಾರ್ಯಾಚರಣೆಯಲ್ಲಿ ಎರಡನೇ ವಿಮಾನದಲ್ಲಿ 235 ಮಂದಿ ಭಾರತೀಯರು ತಾಯ್ನಾಡಿಗೆ ಎಂಟ್ರಿ ಕೊಟ್ಟಿದ್ದಾರೆ.
ಇಸ್ರೇಲ್ನಲ್ಲಿ ಸಿಲುಕಿರೋ ಭಾರತೀಯರನ್ನು ಕರೆತರುವ ಮೋದಿ ಸರ್ಕಾರದ ಆಪರೇಷನ್ ಅಜಯ್ ಕಾರ್ಯಾಚರಣೆಯಡಿ ಅಕ್ಟೋಬರ್ 12 ರ ರಾತ್ರಿ ಮೊದಲ ವಿಮಾನ ದೆಹಲಿಗೆ ಆಗಮಿಸಿತ್ತು. ಈ ವೇಳೆ 5 ಕನ್ನಡಿಗರು ಸೇರಿ 200ಕ್ಕೂ ಹೆಚ್ಚು ಜನ ಅಗಮಿಸಿದ್ದರು. ಅಕ್ಟೋಬರ್ 14, 2023 ರಂದು ಬೆಳಗ್ಗೆ ಭಾರತೀಯರನ್ನು ಕರೆತಂದ ಎರಡನೇ ಬ್ಯಾಚ್ ಆಗಮಿಸಿದೆ.
ಎರಡನೇ ವಿಮಾನದಲ್ಲಿ 235 ಮಂದಿ ಭಾರತೀಯರು ತಾಯ್ನಾಡಿಗೆ ಎಂಟ್ರಿ ಕೊಟ್ಟಿದ್ದು, ಇದ್ರಲ್ಲಿ 9 ಕನ್ನಡಿಗರು ಸಹ ದೆಹಲಿಗೆ ಬಂದಿದ್ದಾರೆ. ನಿನ್ನೆ ತಡ ರಾತ್ರಿ 11:30ಕ್ಕೆ ಇಸ್ರೇಲ್ನ ಟೆಲ್ ಅವಿವಾದಿಂದ ಹೊರಟಿದ್ದ ವಿಮಾನ ಇಂದು ಬೆಳಗ್ಗೆ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದೆ. ಇಸ್ರೇಲ್ನಿಂದ ತಾಯ್ನಾಡಿಗೆ ಬಂದ ಭಾರತೀಯ ಪ್ರಜೆಗಳನ್ನು ಕೇಂದ್ರ ಸಚಿವ ಬರಮಾಡಿಕೊಂಡಿದ್ದಾರೆ.