ಜೇವರ್ಗಿ : ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ವತಿಯಿಂದ ಪ್ರತಿ ಎರೆಡು ವರ್ಷಕೊಮ್ಮೆ ನಡೆಯುವ ರಾಜ್ಯ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ನೈಜ ನಿಖರ ನಿರ್ಭಿತ ಸಮಾಜ ಸುಧಾರಣೆಯ ಸುದ್ದಿಗಳನ್ನು ಮಾಡಿರುವುದನ್ನು ಗುರುತಿಸಿ ಪ್ರಜಾವಾಹಿನಿ ಪತ್ರಿಕೆಯ ಜೇವರ್ಗಿ ತಾಲ್ಲೂಕು ವರದಿಗಾರ ಇಸ್ಮಾಯಿಲ್ ಮಹೇಬೂಬ್ ಸಾಬ್ಶೇಖ ರವರನ್ನು ಪತ್ರಕರ್ತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರ ಸಭಾಂಗಣ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಸ್ಮಾಯಿಲ್ ರವರನ್ನು ರಾಜ್ಯ ನಾಯಕರು ಹಿರಿಯರಿಂದ ಗೌರವಿಸಲಾಯಿತು.