ಔರಾದ್ : ತಾಲ್ಲೂಕಿನಾದ್ಯಂತ ನಾಗರ ಪಂಚಮಿ ಸಡಗರ-ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಹೆಣ್ಣುಮಕ್ಕಳು ಹೊಸ ಹೊಸ ಬಟ್ಟೆ ತೊಟ್ಟು ದೇವಸ್ಥಾನಕ್ಕೆ ಹೋಗಿ ನಾಗದೇವತೆಗೆ ಪೂಜೆ ಮಾಡಿ ಹಾಲನ್ನು ಅರೆಯುವ ಮುಖಾಂತರ ಎಲ್ಲ ಕೆಡುಕುಗಳಿಂದ ರಕ್ಷಿಸುವಂತೆ ಕೋರಿ ನಾಗರಪಂಚಮಿ ಜನರ ಸಂಕಷ್ಟಗಳನ್ನು ಕಳೆದು ಸುಖ ಸಮೃದ್ಧಿ ತರಲಿ ಹೆಣ್ಣು ಮಕ್ಕಳು ದೇವರಲ್ಲಿ ಪ್ರಾರ್ಥನೆ ಮಾಡಿದರು.
ಜನರು ನಾಗದೇವತೆಯ ಜೊತೆಗೆ ಶಿವನನ್ನು ಪೂಜಿಸುತ್ತಾರೆ. ಧಾರ್ಮಿಕ ನಂಬಿಕೆಯ ಪ್ರಕಾರ, ನಾಗ ದೇವತೆಯನ್ನು ಪೂಜಿಸುವುದರೊಂದಿಗೆ ರುದ್ರಾಭಿಷೇಕ ಮಾಡುವ ವ್ಯಕ್ತಿಯು ಎಲ್ಲಾ ತೊಂದರೆಗಳಿಂದ ಮುಕ್ತಿಯನ್ನು ಪಡೆಯುತ್ತಾರೆ.