ಯಾದಗಿರಿ : ರಾಜ್ಯ ಹೆದ್ದಾರಿಯ ಮೇಲೆ ಮೂಖ ಪ್ರಾಣಿಗಳು ದಾರುಣವಾಗಿ ಅಪಘಾತಕ್ಕೆ ಒಳಗಾಗಿರುವ ಘಟನೆ ಶಹಾಪೂರ ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.
ರಸ್ತೆಯ ಮೇಲೆ ರಕ್ತ ಚೆಲ್ಲಿ ಒದ್ದಾಡುತ್ತಿರುವ ಮೂಖ ಪ್ರಾಣಿಗಳು ಒಂದೇಡೆ ಅಪಘಾತದ ರಭಸಕ್ಕೆ ಅಸುನೀಗಿದ ಪಶುಗಳು ಶಹಾಪೂರ ಸಮೀಪದ ಬೇವಿನಹಳ್ಳಿ ಕ್ರಾಸ್ ಬಳಿ ಟ್ರಾಕ್ಟರ್ರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಮೇಲೆ ಹೋಗುತ್ತಿದ್ದ ಪಶುಗಳ ಮೇಲೆ ಹರಿದಿದೆ ಸ್ಥಳದಲ್ಲಿ ಮರ್ನಾಲ್ಕು ಪಶು ಹಾಗೂ ಎಮ್ಮೆ ಸಾವನ್ನಪ್ಪಿದೆ. ಇದರಿಂದ ಮೂಖ ಪ್ರಾಣಿಗಳ ರೋಧನೆ ನೋಡಿಯೋ ನೋಡದಂತೆ ಚಾಲಕ ಪರಾರಿಯಾಗಿದ್ದಾನೆ.
ಒಟ್ಟಿನಲ್ಲಿ ಮೂಖ ಪ್ರಾಣಿಗಳ ಜೀವ ಅಪಘಾತಕ್ಕೀಡಾಗ ಕೆಲ ಹೊತ್ತು ವಾಹನ ಸವಾರರು ಮನ ಕಲವಂತೆ ಮಾಡಿತ್ತು.
ಈ ಕುರಿತು ಸ್ಥಳಕ್ಕೆ ಪಶು ಇಲಾಖೆಯ ಅಧಿಕಾರಿಗಳು ಭೇಟಿ ನೀಡಿಲ್ಲ ಇನ್ನಾದರೂ ಪಶು ಇಲಾಖೆಯವರು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿ ಎಂದು ಪ್ರಾಣಿ ಪ್ರೀಯರ ಅಭಿಪ್ರಾಯವಾಗಿದೆ.