ತುಮಕೂರು : ಬಾರ್ಗೆ ಹೋದ ವ್ಯಕ್ತಿಯನ್ನು ಬಾರ್ ಎದುರೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತುಮಕೂರು ನಗರದ ರಿಂಗ್ ರಸ್ತೆಯಲ್ಲಿ ನಡೆದಿದೆ.
ಸುನೀಲ್ ಪ್ರಸಾದ್(40) ಕೊಲೆಯಾದ ದುರ್ದೈವಿ. ಸುನಿಲ್ನನ್ನು ಜ. 15ರಂದು ಚಿಲ್ಲೋಟ್ ಬಾರ್ ಎದುರು ತಲೆ ಮೇಲೆ ಸಿಮೆಂಟ್ ಬ್ಲಾಕ್ ಎತ್ತಾಕಿ ಕೊಲೆ ಮಾಡಲಾಗಿತ್ತು. ಕೊಲೆ ಪ್ರಕರಣದ ವಿಚಾರಣೆ ನಡೆಸಿದಾಗ ಪೊಲೀಸರಿಗೆ ಅಘಾತಕಾರಿ ವಿಚಾರ ತಿಳಿದುಬಂದಿದೆ. ಮೃತನ ಪತ್ನಿಯೇ ಗಂಡನ ಕೊಲೆ ಮಾಡಿಸಿರುವುದಾಗಿ ತಿಳಿದುಬಂದಿದೆ.
ಸುನೀಲ್ ಪ್ರಸಾದ್ ಪತ್ನಿ ಪ್ರಮಿಳ, ರಂಗಯ್ಯ ಹೆಸರಿನ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಈ ವಿಚಾರ ತಿಳಿದು ಗಂಡ ಸುನೀಲ್ ಪ್ರಸಾದ್ ಗಲಾಟೆ ಮಾಡಿದ್ದ. ಅದೇ ಕಾರಣದಿಂದಾಗಿ ಪ್ರಮಿಳ ಗಂಡನ ಕೊಲೆಗೆ ಸ್ಕೆಚ್ ಹಾಕಿದ್ದಾಳೆ. ಇದೀಗ ಕೊಲೆ ಮಾಡಿದ ಆರೋಪಿಗಳು ಪೊಲೀಸರ ವಶವಾಗಿದ್ದಾರೆ.
ಈ ಸಂಬAಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಆರೋಪಿ ರಂಗಯ್ಯ ಹಾಗೂ ಸುನೀಲ್ ಪತ್ನಿ ಪ್ರಮಿಳಳನ್ನು ಬಂಧಿಸಲಾಗಿದೆ.