ಹಸೆಮಣೆ ಏರುವ ಮೊದಲೇ ಮಸಣ ಸೇರಿದ ಯುವಕ

  • In Crime
  • May 8, 2020
  • 1958 Views
ಹಸೆಮಣೆ ಏರುವ ಮೊದಲೇ ಮಸಣ ಸೇರಿದ ಯುವಕ

ಸಿಂದಗಿ: ತಾಲ್ಲೂಕಿನ ಯಂಕಂಚಿ ಗ್ರಾಮದಲ್ಲಿ ಹೊಸ ಟಿಸಿ ಅಳವಡಿಸುವ ವೇಳೆ ವಿದ್ಯುತ್ ಅವಘಡ ಸಂಭವಿಸಿ ಯುವಕನೋರ್ವ ಸಾವನ್ನಪ್ಪಿದ್ದಾನೆ.

ಸಿಂದಗಿ ತಾಲೂಕಿನ ಪುರದಾಳ ಗ್ರಾಮದ ಬಸನಗೌಡ ಬಿರಾದಾರ(25) ಎಂಬಾತನೇ ಮೃತ ದುರ್ದೈವಿ.

ಯಂಕಂಚಿ ಗ್ರಾಮದ ಮೋಹನ ಕುಂಬಾರ ಎಂಬುವರ ಜಮೀನಿನಲ್ಲಿ ಕೆಇಬಿ ಕಾಂಟ್ರ್ಯಾಕ್ಟರ್ ಹಿಡಿದ ವಿದ್ಯುತ್ ಪರಿವರ್ತಕ ಅಳವಡಿಸುವ ಗುತ್ತಿಗೆ ಕೆಲಸಕ್ಕೆ ಹೋಗಿದ್ದ ಬಸನಗೌಡ, ಪಕ್ಕದ ಹೊಲದಲ್ಲಿನ ಟಿಸಿಯಿಂದ ವಿದ್ಯುತ್ ಸಂಪರ್ಕ ಕಲ್ಪಿಸಲು ಹೋದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.

ಈ ಘಟನೆ ಕುರಿತು ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದ್ದು, ಗುರವಾರ ರಾತ್ರಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶವ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.

Related