ಬೈಲಹೊಂಗಲ: ಮಳೆ, ಗಾಳಿಗೆ ಧರೆಗುರುಳಿದ ಮರ, ವಿದ್ಯುತ್ ಕಂಬಗಳು

ಬೈಲಹೊಂಗಲ: ಮಳೆ, ಗಾಳಿಗೆ ಧರೆಗುರುಳಿದ ಮರ, ವಿದ್ಯುತ್ ಕಂಬಗಳು

ಬೈಲಹೊಂಗಲ: ಸಮೀಪದ ಹೊಸೂರ ಗ್ರಾಮದಲ್ಲಿ ಭಾರಿ ಪ್ರಮಾಣದ ಮಳೆ, ಗಾಳಿ, ಸಿಡಿಲಿಗೆ ವಿದ್ಯುತ್ ಕಂಬ, ಮನೆಯ ಮೇಲ್ಛಾವಣಿ, ಬೃಹತ್ ಗಾತ್ರದ ಮರಗಳು ಧರೆಗುರುಳಿದವು.

ಮಂಗಳವಾರ ಸಂಜೆ ಏಕಾಏಕಿ ಗುಡುಗು, ಮಿಂಚು, ಗಾಳಿಯೊಂದಿಗೆ ಸುರಿದ ಮಳೆಗೆ ಬೃಹತ್ ಗಾತ್ರದ ಮರಗಳು, ಟಿಸಿ ಕಂಬ, ಮನೆಯ ಮೇಲ್ಛಾವಣಿ ಹಾರಿ ಹೋಗಿ ಅಪಾರ ಹಾನಿಯಾಗಿದೆ.

ಹಿರಿಯ ರೈತ ಮುಖಂಡ ಬಾಳಪ್ಪ ಚಳಕೊಪ್ಪ ಅವರ ಮನೆಯ ಮೇಲ್ಛಾವಣಿ ಹಾರಿಹೋಗಿದ್ದು, ಪರಿಹಾರ ವಿತರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Related